Chief Editor
Manohar. R (Manu)
Photo Journalist
chitrataramanu@gmail.com
+91 9845549026
ನಟನೆ ಒಂದೆ ಆದರೆ ಭಾಷೆ ಬೇರೆ ಹೀಗಾಗಿ ಸಮಸ್ಯೆಯಾಗಿಲ್ಲ ಎಂದಿದ್ದಾರೆ ಕಾಂತಾರ ಬೆಡಗಿ ಸಪ್ತಮಿಗೌಡ
Posted date: 14 Sun, Apr 2024 09:52:18 PM
ಬಾಲಿವುಡ್‍ನ ``ದಿ ವ್ಯಾಕ್ಸಿನ್ ವಾರ್`` ಚಿತ್ರದಲ್ಲಿ ನಟಿಸಿ ಬಂದ ಬೆನ್ನಲ್ಲೇ ಇದೀಗ ತೆಲುಗು ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಚಿತ್ರಕ್ಕಾಗಿ ಕದುರೆ ಸವಾರಿ ಕಲಿತು ಹುಬ್ಬೇರಿಸುವಂತೆ ಮಾಡಿದ್ದಾರೆ  ನೈಸರ್ಗಿಕ ಬ್ಯುಟಿ ನಟಿ ಸಪ್ತಮಿಗೌಡ.
 
ನಿತಿನ್ ಅಭಿನಯದ ``ತಮ್ಮುಡು' ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಈ ಚಿತ್ರಕ್ಕಾಗಿ ಕುದುರೆ ಸವಾರಿ ಕಲಿತಿದ್ದೇನೆ ಸದ್ಯದಲ್ಲಿಯೇ   ತಮ್ಮ ಪಾತ್ರದ ಚಿತ್ರೀಕರಣ ಆರಂಭವಾಗಲಿದೆ ಎಂದು ಸಪ್ತಮಿ ಗೌಡ ತಿಳಿಸಿದ್ಧಾರೆ.

ಯಾವುದೇ ಕತೆ ಬಂದರೂ ಮನೆಯಲ್ಲಿ ಚರ್ಚೆ ನಡೆಸುತ್ತೇನೆ. ಆ ಬಳಿಕ ಡಾಲಿ ಧನಂಜಯ, ವಿಜಯ್ ಕಿರಂಗದೂರು, ಯೋಗಿ ಜಿ ರಾಜ್, ಸಂತೋಷ್ ಆನಂದ್ ರಾಮ್ ಜೊತೆ ಚರ್ಚೆ ನಡೆಸಿ ಚಿತ್ರದಲ್ಲಿ ನಟಿಸಬೇಕೋ ಬೇಡವೋ ಎನ್ನುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವೆ ಎಂದಿದ್ಧಾರೆ.

ಚಿತ್ರ ಒಪ್ಪಿಕೊಳ್ಳುವ ಮುನ್ನ ನನ್ನ ಕಥೆಯಲ್ಲದೆ ಇಡೀ ಕಥೆ  ಕೇಳುತ್ತೇನೆ, ಇಷ್ಟ ಆದರೆ ಮುಂದುವರಿಯುತ್ತೇನೆ. ಕಾಂತಾರ-1 ಚಿತ್ರದಲ್ಲಿ ಲೀಲಾ ಪಾತ್ರ ಇಲ್ಲ, ಹೀಗಾಗಿ ನಟಿಸುತ್ತಿಲ್ಲ, ಚಿತ್ರಕ್ಕೆ ಬೇರೊಬ್ಬ ನಟಿ ಬಂದಿದ್ಧಾರೆ,ಅದರ ಬಗ್ಗೆ ತಂಡ ಮಾಹಿತಿ ಹಂಚಿಕೊಳ್ಳಲಿದೆ. ಕಾಂತಾರ ಪ್ರೀಕ್ವೆಲ್ ಬಗ್ಗೆ ಕುತೂಹಲ ಹೆಚ್ಚಿದೆ. ಚಿತ್ರ ನೋಡಲು ತಾವೂ ಕಾತುರಳಾಗಿದ್ದೇನೆ.

ಬಾಲಿವುಡ್ ಮತ್ತು ತೆಲುಗು ಚಿತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಹೊಂಬಾಳೆ ಸಂಸ್ಥೆಯಂತರ ವಿಶ್ವದರ್ಜೆತ ಗುಣಮಟ್ಟ ಇರುವ ಸಂಸ್ಥೆಯಲ್ಲಿ ಕೆಲಸ ಮಾಡಿದ ನಂತರ ಎಲ್ಲಿಗೂ ಹೋದರೂ ಹೊಂಬಾಳೆ ಸಂಸ್ಥೆಯೇ ಕಾಣಲಿದೆ. ವ್ಯತ್ಯಾಸ ಏನೂ ಇಲ್ಲ. ನಟನೆ ಒಂದೆ ಆದರೆ ಭಾಷೆ ಬೇರೆ ಹೀಗಾಗಿ ಸಮಸ್ಯೆಯಾಗಿಲ್ಲ ಎಂದಿದ್ದಾರೆ

``ತಂದೆ ಎಸ್.ಕೆ. ಉಮೇಶ್  ಪೆÇಲೀಸ್ ಅಧಿಕಾರಿಯಾಗಿದ್ದದಿಂದ ಯುಪಿಎಸ್‍ಸಿ ಪರೀಕ್ಷೆ ತೆಗೆದು ಎಂದಿದ್ದರು ನಾನು ಪ್ರಯತ್ನ ಪಟ್ಟೆ, ಆದರೆ ಅನಿರೀಕ್ಷಿತವಾಗಿ ಸಿನಿಮಾಗೆ ಬಂದಿದ್ದರಿಂದ ಅದರ ಆಸೆ ಕೈಬಿಟ್ಟು ಸಿನಿಮಾದಲ್ಲಿ ಸಂಪೂರ್ಣ ತೊಡಗಿಸಿಕೊಂಡಿರುವೆ ಎಂದು ನಟಿ ಸಪ್ತಮಿಗೌಡ ಮಾಹಿತಿ ಹಂಚಿಕೊಂಡಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ನಟನೆ ಒಂದೆ ಆದರೆ ಭಾಷೆ ಬೇರೆ ಹೀಗಾಗಿ ಸಮಸ್ಯೆಯಾಗಿಲ್ಲ ಎಂದಿದ್ದಾರೆ ಕಾಂತಾರ ಬೆಡಗಿ ಸಪ್ತಮಿಗೌಡ - Chitratara.com
Copyright 2009 chitratara.com Reproduction is forbidden unless authorized. All rights reserved.